ಮಕ್ಕಳಿಗಾಗಿ ಸುಭಾಷಿತಗಳು
- ಮನಸ್ಸಿಗೆ ಆನಂದವನ್ನುಂಟು ಮಾಡುವುದೇ ಸ್ವರ್ಗ
- ರೆಕ್ಕೆಗಳಿಲ್ಲದ ಹಕ್ಕಿ, ಒಣಗಿದ ಮರ - ನೀರಿಲ್ಲದ ಸರೋವರ, ಹಲ್ಲುಕಿತ್ತ ಹಾವು, ಬಡವ ಎಲ್ಲರೂ ಒಂದೇ.
- ದೀಪವು ತನ್ನನ್ನು ತಾನೇ ಪ್ರಕಾಶ ಗೊಳಿಸುತ್ತದೆ ದೀಪವನ್ನು ನೋಡಲು ಬೇರೆ ದೀಪ ಬೇಡ.
- ನಾಲಿಗೆ ಬಹಳ ಪ್ರಮಾದಕಾರಿ. ರುಚಿಗಾಗಿ ವ್ಯಾಮೋಹ ಗೊಳ್ಳುವ ಬುದ್ಧಿಹೀನರು ನಾಶವಾಗುತ್ತಾರೆ; ಮೀನು ಗಾಳದಿಂದ ಸಾಯುವಂತೆ.
- ವೈವಿಧ್ಯ ಹಾಗೂ ವ್ಯವಸ್ಥೆಯಿರುವ, ಸಮಾನತೆ ಇಲ್ಲದವರಿಗೆ ಸಮಾನತೆ ಕೊಡುವ, ಆಕರ್ಷಕ ಪದ್ಧತಿಯೇ ಪ್ರಜಾಪ್ರಭುತ್ವ.
- ಒಳ್ಳೆಯ ಮಾತುಗಳಿಂದ ಎಲ್ಲಾ ಪ್ರಾಣಿಗಳಿಗೂ ಸಂತಸವಾಗುತ್ತದೆ ಒಳ್ಳೆಯ ಮಾತನಾಡಬೇಕು.
- ನಾನು ನನ್ನ ಜನ್ಮಕ್ಕಾಗಿ ತಂದೆಗೆ ಋಣಿಯಾಗಿದ್ದೇನೆ ಆದರೆ ನನ್ನ ಜೀವನಕ್ಕಾಗಿ ಶಿಕ್ಷಕರಿಗೆ ಕೃತಜ್ಞನಾಗಿದ್ದೇನೆ. -ಅಲೆಗ್ಸಾಂಡರ್
- ಶಿಕ್ಷಕ ನವ ದೇಶದ ಹಾಗೂ ಶಿಕ್ಷಣದ ಬೆನ್ನುಮೂಳೆ ಇದ್ದಹಾಗೆ -ಕೊಠಾರಿ ಆಯೋಗ.
- ಹೂವಿಗೆ ಸುವಾಸನೆ ಇದ್ದಂತೆ ಮನುಷ್ಯನಿಗೆ ವ್ಯಕ್ತಿತ್ವ -ಪಿ ಸೈರಸ್
- ರಾಗ ದ್ವೇಷಾಸೂಯೆಗಳು ಅಧಃಪತನಕ್ಕೆ ಕಾರಣವಾಗುತ್ತದೆ.
- ಹೊಗಳಿಕೆ ಖ್ಯಾತಿ ಎನ್ನುವುದು ನದಿ ಇದ್ದಂತೆ ಹಗುರವಾದದ್ದನ್ನು ತೇಲಿಸುತ್ತದೆ, ತೂಕ ವಾದದ್ದನ್ನು ಮುಳುಗಿಸುತ್ತದೆ. -ಪ್ರಾನ್ಸಿಸ್ ಬೇಕನ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ